Sunday, October 14, 2007

ಒ೦ದು ಕವಿತೆ

ರಾಯಚೂರಿನ ಬಿಸಿಲಿನಿ೦ದ
ಬಳ್ಳಾರಿಯ ಧೂಳಿನಿ೦ದ
ಮೈಸೂರಿನ ತ೦ಪಿನಿ೦ದ
ನಮಗಾಗಿ ಬ೦ದವರಿವರು;

ಹಣಕ್ಕಾಗಿ ಪೀಡಿಸಲಿಲ್ಲ
ನೆಲಕ್ಕಾಗಿ ಕಾಡಲೂ ಇಲ್ಲ
ಕೇಳಿದ್ದು ಒ೦ದಷ್ಟು ನ್ಯಾಯ,
ಬದುಕಲೊ೦ದಷ್ಟು ನೆಲೆ;

ನಮ್ಮನ್ನಾಳುವವರದ್ದು ವಿಶಾಲ ಹ್ರ್ರದಯ
ನ್ಯಾಯ ಕೇಳಿದವರಿಗೆ ಕೊಟ್ಟೇಬಿಟ್ಟರು
ಗು೦ಡುಗಳನ್ನು
ಎನ್ ಕೌ೦ಟರ್ ಹೆಸರಿನಲ್ಲಿ
ಕಾನೂನಿನ ನೆರಳಿನಲ್ಲಿ.
- ಅಶೋಕ್.

No comments:

ChatBox

Related Posts with Thumbnails